Feeds:
Posts
Comments
ತರೀಕೆರೆ: ತರೀಕೆರೆ ತ್ಲಾಲೂಕಿನ್ಲಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಕುಸಿದ್ದಿದು, ಐವತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಪಟ್ಟಣದ್ಲಲಿ ಓರ್ವ ಬಾಲಕ ನಾಪತ್ತೆಯಾಗ್ದಿದು, ಮಳೆಯ ನೀರಿನ್ಲಲಿ ಕೊಚ್ಚಿಹೋಗಿರ ಬಹುದೆಂದು ಶಂಕಿಸಲಾಗಿದೆ.
ಮಂಗಳವಾರ ರಾತ್ರಿ ೯.೩೦ಕ್ಕೆ ಪ್ರಾರಂಭವಾದ ಬಿರುಸು ಮಳೆಯಿಂದ ತ್ಲಾಲೂಕಿನ ಬಹುತೇಕ ಕೆರೆ ಕಟ್ಟೆಗಳ ಕೋಡಿಗಳು ತುಂಬಿ ಹರಿಯುತ್ತಿವೆ, ಜಂಬದಹಳ್ಳದ ಜಲಾಶಯದ ಕೋಡಿಯ ಮೇಲೆ ಎರಡು ಅಡಿ ನೀರು ಹರಿಯುತ್ತಿದೆ.
ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನ್ಲಲಿರುವ ಡಾ.ಬಿ.ಆರ್.ಅಂಬೇಡ್ಕರ್‌ನಗರ, ಕಾಮೋಶ್ ನಗರ ಮತ್ತು ಪರ್ಮಾನ್‌ಕಟ್ಟೆಯ ವಸತಿ ಪ್ರದೇಶದ್ಲಲಿನ ಹತ್ತಕ್ಕೂ ಹೆಚ್ಚು ಮನೆಗಳು ಕುಸಿದ್ದಿದು, ಮೂವತ್ತಕ್ಕೂ ಹೆಚ್ಚು ಮನೆಗಳು ಜಲಾವೃತ ಗೊಂಡಿವೆ,ಇಲಿನ ಜನರು ರಾತ್ರಿಯಿಡಿ ಆಂಜನೇಯ ಸ್ವಾಮಿ ದೇವಾಲಯದ್ಲಲಿ ಕಾಲ ಕಳೆದ್ದಿದಾರೆ.
ತ್ಲಾಲೂಕಿನ ಅಮೃತಾಪುರದ ಹೊಬಳಿಯ್ಲಲಿ ಮೂರು ಮನೆಗಳು ಮತ್ತು ಅಜ್ಜಂಪುರ ಹೊಬಳಿಯ್ಲಲಿ ಮೂರು ಮನೆಗಳು ಕುಸಿದಿವೆ. ಮಳೆಯ ತೀವ್ರತೆಗೆ ಒಣಗಿಸಲು ಹಾಕ್ದಿದ ಲಕ್ಷಾಂತರ ರೂ ಬೆಲೆ ಬಾಳುವ ಅಡಿಕೆ ಗೊಟುಗಳು ನೀರಿನ್ಲಲಿ ಕೊಚ್ಚಿಹೊಗ್ದಿದು, ಬೇಯಿಸಿದ ಅಡಿಕೆಗಳು ನೆನೆದು ಬೆಳೆಗಾರರು ಸಂಕಟಪಡುವಂತಾಗಿದೆ.
ಪಟ್ಟಣದ ಪ್ರಮುಖಕೆರೆ  ರಾಮಾನಾಯಕ್ಕನ ಕೆರೆಯ ಕೊಡಿನೀರು ಹರಿದು ಪಟ್ಟಣದ ಪಕ್ಕದ್ಲಲೇ ಇರುವ ಚಿಕ್ಕೆರೆ ಕೋಡಿ ನೀರು ಹರಿದು ಎ.ಪಿ.ಎಂ.ಸಿ. ಆವರಣದ ೧೦೦ ಅಡಿಗಳಷ್ಟು ಕಾಂಪೌಂಡು ಗೋಡೆ  ಕುಸಿದು, ಆವರಣದ್ಲಲಿರುವ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಸಿಮೆಂಟ್ ಮತ್ತು ದಿನಸಿ ಪದಾರ್ಥಗಳು ನೀರಿನಿಂದ ತೊಯ್ದು ಅಪಾರ ನಷ್ಟವಾಗಿದೆ. ಎಚ್ಚೆತ್ತು ಕೊಂಡ ತ್ಲಾಲೂಕು ಆಡಳಿತ ರಾಮಾನಾಯ್ಕನ ಕೆರೆಯ ನೀರು ಸರಾಗವಾಗಿ ಹರಿಯುವಂತೆ ಜೆ.ಸಿ.ಬಿ. ಯಂತ್ರವನ್ನು ಬಳಸಿ ಬದಲಿಮಾರ್ಗವನ್ನು ಮಾಡಿದೆ.
ಗಂಜಿ ಕೇಂದ್ರವನ್ನು ತೆರೆಯಲು ಸೂಚನೆ :
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರ, ಕಾಮೊಶ್ ನಗರ ಮತ್ತು ಪರರ್ಮಾನುಕಟ್ಟೆ ವಸತಿ ಪ್ರದೇಶ ಸಂತ್ರಸ್ತರ  ಕುಟುಂಬಗಳಿಗೆ ಪಟ್ಟಣದ ಉರ್ದು ಶಾಲೆಯ್ಲಲಿ  ತಾತ್ಕಾಲಿಕ ವಸತಿ ಮತ್ತು ಗಂಜಿ ಕೇಂದ್ರವನ್ನು ತೆರೆಯುವಂತೆ ಪುರಸಭೆ ಅಧಿಕಾರಿಗಳಿಗೆ ತಹಶೀಲ್ದಾರ್ ಸೂಚನೆ ನೀಡ್ದಿದಾರೆ.
ಲಕ್ಕವಳ್ಳಿ ಹೊಬಳಿ, ಅಮೃತಾಪುರದ ಹೊಬಳಿ ಮತ್ತು ಅಜ್ಜಂಪುರ ಹೊಬಳಿಯ್ಲಲಿ ಮಳೆಯಿಂದ ಅಪಾರ ನಷ್ಟ ಉಂಟಾಗ್ದಿದು, ನಷ್ಟದ ಪ್ರಮಾಣ ಎಷ್ಟೆಂದು ಅಂದಾಜಿಸುವ ಕಾರ್ಯವನ್ನು ತ್ಲಾಲೂಕು ಆಡಳಿತ ಮಾಡುತ್ತಿದೆ .
ನೊಂದವರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಪುರಸಬಾ ಸದಸ್ಯ ಉಮ್ಮರ್ ಫಾರೂಕ್ ತ್ಲಾಲೂಕು ಆಡಳಿತವನ್ನು ಒತ್ತಾಯಿಸ್ದಿದಾರೆ.
ಬಾಳೆಹೊನ್ನೂರು: ‘ನಾವು ಈಗ ಪೊಲೀಸರನ್ನೂ ನಂಬಲ್ಲ, ಅಧಿಕಾರಿಗಳನ್ನೂ ನಂಬಲ್ಲ, ನಕ್ಸಲರನ್ನೂ ನಂಬಲ್ಲ. ಎಲ್ಲ ನಮ್ಮ ಹಣೆಯಲ್ಲಿ ಬರೆದಿದ್ದಂತೆ ಆಗುತ್ತದೆ. ಮುಂದಿನದ್ದು ದೈವೇಚ್ಛೆ…’
ಕಾಡಿನ ಒಡಲಲ್ಲೇ ಬಹುಕಾಲದಿಂದ, ತಮ್ಮ ಮಟ್ಟಿಗೆ ಸಂತೃಪ್ತಿಯ ಜೀವನ ನಡೆಸಿದ ‘ಕೆಳಜಾತಿ’ಯ (ವರ್ಗ) ದಲಿತರು ಮತ್ತು ‘ಮೇಲ್ಜಾತಿ’ಯ (ವರ್ಗ) ಭಟ್ಟರು ಇದೀಗ ತಮ್ಮ ಮುಂದೆ ಪ್ರತ್ಯಕ್ಷವಾಗಿರುವ ಸಮಸ್ಯೆಗಳನ್ನು ಹೊರ ಜಗತ್ತಿಗೂ ಸಾರಿ ಹೇಳಬೇಕೆಂದು ತಹತಹಿಸುತ್ತಿದ್ದರು.
ಇತ್ತ ಪೊಲೀಸರ- ಅತ್ತ ನಕ್ಸಲರ ಭಯದಿಂದ ತತ್ತರಿಸಿದ್ದ ಅವರು ಬಾಳೆಹೊನ್ನೂರು ಸಮೀಪದ ಅಜ್ಞಾತ ಸ್ಥಳವೊಂದರಲ್ಲಿ ‘ಪ್ರಜಾವಾಣಿ’ ಎದುರು ಮುಕ್ತವಾಗಿ ಮನಸ್ಸು ತೋಡಿಕೊಂಡರು…
ಶಾಂತಿ ಬೇಕು:
ಮಲೆನಾಡಿನಲ್ಲಿ ಅನುಮಾನವೆಂಬ ಭೂತದ ರುದ್ರ ನೃತ್ಯ ನಡೆದಿದೆ. ಇಲ್ಲಿರುವುದು ಎರಡೇ ಬಣ್ಣ. ಒಂದು ಕಪ್ಪು ಇನ್ನೊಂದು ಬಿಳುಪು (ಅದನ್ನು ನೀವು ಪೊಲೀಸ್ ಮತ್ತು ನಕ್ಸಲ್ ಎಂದು ಓದಿಕೊಳ್ಳಬಹುದು). ನಡುವಣ ಬಣ್ಣಗಳೇ ಇಲ್ಲಿ ಅದೃಶ್ಯವಾಗಿವೆ. ನಮಗೆ ಇಬ್ಬರ ಸಹವಾಸವೂ ಬೇಡ. ಪ್ಲೀಸ್ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ. ನೂರಾರು ವರ್ಷಗಳಿಂದ ಒಂಟಿ ಮನೆಯ್ಲಲಿಯೇ ಬದುಕುತ್ತಿದ್ದ ನಮಗೆ ಇದೀಗ ರಾತ್ರಿ ವೇಳೆ ಯಾರಾದರೂ ಬಾಗಿಲು ತಟ್ಟಿದರೆ ಮೈ ನಡುಗುತ್ತದೆ. ಬೂಟುಗಾಲಿನ ಸದ್ದು, ಬಂದೂಕಿನ ಮೊರೆತ ನಮ್ಮ ದೈರ್ಯವನ್ನು ನುಂಗಿದೆ.
ಅಷ್ಟೇಕೆ ಸ್ವಾಮಿ ನಮ್ಮ ಮನೆಗಳಲ್ಲಿ ಮುಂದಿನ ವಾರಕ್ಕೆಂದು ಒಂದಿಷ್ಟು ಹೆಚ್ಚಿಗೆ ಅಕ್ಕಿಯನ್ನೂ ಸಂಗ್ರಹಿಸುವಂತಿಲ್ಲ. ನಕ್ಸಲರು ‘ನಿಮಗೇಕೆ ಅಷ್ಟೊಂದು ಅಕ್ಕಿ. ನಾವು ನಿಮಗಾಗಿ ಹೋರಾಡುವವರು. ನಮಗೀಗ ಅವಶ್ಯಕತೆಯಿದೆ. ಕೊಟ್ಟುಬಿಡಿ’ ಎಂದು ಕೇಳುತ್ತಾರೆ, ಕೊಡದ್ದಿದರೆ ಕಿತ್ತುಕೊಳ್ಳುತ್ತಾರೆ. ನಾಳೆ ಪೊಲೀಸರು ಬಂದರೆ ‘ನೀವು ನಕ್ಸಲರಿಗೆ ಅಕ್ಕಿ ಕೊಟ್ಟಿದ್ದೀರಿ.  ನಕ್ಸಲ್ ಬೆಂಬಲಿಗರು’ ಎಂದು ನಮ್ಮನ್ನೇ ಜೀಪಿಗೆ ಹತ್ತಿಸಿಕೊಳ್ಳುತ್ತಾರೆ.
ನಕ್ಸಲ್ ಉಪಟಳ ಶುರುವಾಗುವುದಕ್ಕೆ ಮೊದಲು ಕಿಗ್ಗಾ ಆಸುಪಾಸಿನ ಗ್ರಾಮಗಳಿಗೆ ನೀವು ಬರಬೇಕಿತ್ತು. ನಿಮ್ಮನ್ನು ಇಡೀ ಊರು ತನ್ನ ಅತಿಥಿ ಎಂದು ಪರಿಗಣಿಸುತ್ತಿತ್ತು. ನಿಮ್ಮ ಲಗೇಜನ್ನು ಗ್ರಾಮಸ್ಥರೇ ಹೊತ್ತು ನೀವು ತಲುಪಬೇಕಾದ ಮನೆ ತಲುಪಿಸುತ್ತಿದ್ದರು. ಆದರೆ ಇಂದು ನಮ್ಮೂರಿಗೆ ಬನ್ನಿ. ನಿಮ್ಮನ್ನು ನೋಡಿದ ಜನ ನಕ್ಸಲ್ ರಿಕ್ರೂಟರ್ ಅಥವಾ ಪೊಲೀಸ್ ಮಾಹಿತಿದಾರ ಎಂದು ಬಾಗಿಲು ಹಾಕಿಕೊಳ್ಳುತ್ತಾರೆ. ಅಲ್ಲಿ ಉಳಿದಿರುವುದು ಕಪ್ಪು ಮತ್ತು ಬಿಳುಪು ಮಾತ್ರ.
ಪೊಲೀಸರ ವೈಖರಿ:
ನಕ್ಸಲರನ್ನು ಬಿಡಿ ನಾವು ಪ್ರಶ್ನಿಸುವಂತಿಲ್ಲ. ಆದರೆ ನಮ್ಮ ತೆರಿಗೆಯಿಂದಲೇ ಹೊಟ್ಟೆಹೊರೆಯುವ ಪೊಲೀಸರು ಸೂಕ್ಷ್ಮವಾಗಿ ವರ್ತಿಸ್ದಿದರೆ ನಿಜಕ್ಕೂ ನಮಗೆ ಇಂಥ ಪಾಡು ಬರುತ್ತಿರಲಿಲ್ಲ. ಶೃಂಗೇರಿ ಠಾಣೆಗೆ ಬರುವ ಬಹುತೇಕ ಪೊಲೀಸರು ಪನಿಶ್‌ಮೆಂಟ್ ಟ್ರಾನ್ಸ್‌ಫರ್ ಮೇಲೆ ಬಂದವರು. ಇಲ್ಲಿಂದ ಹೊರಗೆ ಹೋಗುವುದನ್ನೇ ಪ್ರಮೋಶನ್ ಎಂದುಕೊಂಡವರಿಂದ ಎಂಥ ರಕ್ಷಣೆ ಸಿಗಲು ಸಾಧ್ಯ?
ನಕ್ಸಲರು ನಮ್ಮನ್ನು ನಂಬುವಷ್ಟೂ ಈ ಪೊಲೀಸರು ನಮ್ಮನ್ನು ನಂಬುವುದಿಲ್ಲ. ನಾವು ಕೊಡುವ ಮಾಹಿತಿಗೆ ತಕ್ಷಣ ಸ್ಪಂದಿಸುವುದಿಲ್ಲ. ನಾವೇ ಮಾಹಿತಿ ಕೊಟ್ಟಿದ್ದು ಎಂದು ತಿಳಿದರೆ ಊರಿನವರಿಗೆಲ್ಲಾ ಕೇಳಿಸುವಂತೆ ‘ಓ ನೀವಾ… ಅಂದು ನೀವು ಕೊಟ್ಟ ಮಾಹಿತಿ ಉಪಯೋಗಕ್ಕೆ ಬರಲಿಲ್ಲ ರಾಯರೇ’ ಎಂದು ಬಿಡುತ್ತಾರೆ. ಊರಿನವರ ಕಣ್ಣಿಗೆ ನಾವು ಪೊಲೀಸ್ ಮಾಹಿತಿದಾರರಾಗುತ್ತೇವೆ. ಈ ಮಾಹಿತಿ ಸರಾಗವಾಗಿ ನಕ್ಸಲರಿಗೆ ತಲುಪಿ ನಾವು ಊರು ಬಿಡುವಂತೆ ಅಥವಾ ಈ ದೇಹ ಬಿಡುವಂತೆ ಆಗುತ್ತದೆ.
ಮಾಹಿತಿಗೆ ಸಿಕ್ಕ ಫಲ:
ನಮಗೆ ನಕ್ಸಲರು ಶತ್ರುಗಳಲ್ಲ- ಪೊಲೀಸರು ಮಿತ್ರರಲ್ಲ. ಆದರೂ ನಾವು ಪೊಲೀಸರನ್ನೇ ನಂಬುತ್ತೇವೆ ತಾನೆ. ಆದರೆ ಅದಕ್ಕೆ ಸಿಕ್ಕ ಫಲವಾದರೂ ಏನು? ಪೊಲೀಸರಿಗೆ ಮಾಹಿತಿ ಕೊಟ್ಟ ಹೆಮ್ಮಿಗೆ ಚಂದ್ರಕಾಂತನಿಗೆ ಆದ ಗತಿಯನ್ನು ನೆನೆಪಿಸಿಕೊಂಡರೇ ಮೈ ಜುಂ ಎನಿಸುತ್ತದೆ.
ಸ್ಥಳೀಯ ಪೊಲೀಸರ ಮೇಲೆ ನಂಬಿಕೆಯಿಲ್ಲ ಎಂದೇ ನಾವು ಚಿಕ್ಕಮಗಳೂರು, ಮಂಗಳೂರು ಅಥವಾ ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡುತ್ತೇವೆ. ‘ನಾಳೆ ಫೋನ್ ಮಾಡಿ, ಶೃಂಗೇರಿ ಸ್ಟೇಷನ್‌ಗೇ ಫೋನ್ ಮಾಡಿ’ ಎಂದರೆ ನಾವು ಏನು ಮಾಡಬೇಕು?
ಅಸಮರ್ಥ ಶಾಸಕ:
ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ನಕ್ಸಲರಿಗೆ ಸಂಪೂರ್ಣ ಶರಣಾಗಿದ್ದಾರೆ. ನಮ್ಮ ಇಡೀ ಊರು ಅವರನ್ನು ಬೆಂಬಲಿಸುತ್ತದೆ. ಆದರೆ ನಮ್ಮ ಮನೆಗೆ ನಕ್ಸಲರು ಬಂದು ಧಮಕಿ ಹಾಕಿದ್ದಾರೆ ಎಂದು ತಿಳಿದ ನಂತರವೂ ಅವರು ನಮ್ಮೂರಿಗೆ ಬಂದು ನಮಗೆ ದೈರ್ಯ ಹೇಳಲಿಲ್ಲ. ಆರ್‌ಎಸ್‌ಎಸ್ ಶಾಖೆಗೆ ಹೋದ ನಮ್ಮೂರಿನ ಅನೇಕ ಮಂದಿ ಯಾವುದೇ ‘ಕೂಲಿ’ ಪಡೆಯದೇ ಅವರ ಪರವಾಗಿ ಮನೆಮನೆ ತಿರುಗಿ ಓಟು ಕೇಳ್ದಿದೇವೆ. ಆದರೆ ‘ಕೂಲಿ’ ಬೆಂಬಲಿಗರಿಗೆ ಸಿಗುವ ಕಿಮ್ಮತ್ತು ನಮಗೆ ಎಂದಿಗೂ ಸಿಗಲಿಲ್ಲ.
ಶೃಂಗೇರಿ ತಹಸೀಲ್ದಾರರು ಪ್ರತಿ ತಿಂಗಳು ನಡೆಸುವ ಜನಸಂಪರ್ಕ ಸಭೆಗೆ ಹಿರಿಯ ಅಧಿಕಾರಿಗಳು ಬರುತ್ತಾರೆ. ಆದರೆ ಶಾಸಕರು ನಾಪತ್ತೆ. ಇಲ್ಲಿನ ಜನರನ್ನು ಪ್ರತಿನಿಧಿಸುವ, ಸ್ಟೆನ್‌ಗನ್ ಹಿಡಿದ ಗನ್‌ಮ್ಯಾನ್ ರಕ್ಷಣೆಯಿರುವ ಶಾಸಕರಿಗೇ ಇಷ್ಟು ಭಯವಿದ್ದರೆ ಉಳಿದವರ ಪಾಡು ಏನು? ಸಂಘ ಪರಿವಾರದ ಹಿನ್ನೆಲೆಯಿರುವ ನಮ್ಮಂಥವರ ಮತವನ್ನು ತಮ್ಮ ಮೀಸಲು ಸ್ವತ್ತು ಎಂದುಕೊಂಡಿರುವ ಇವರು ನಮ್ಮನ್ನು ನಿರ್ಲಕ್ಷಿಸುತ್ತ್ದಿದಾರೆ ಅಥವಾ ನಕ್ಸಲರಿಗೆ ಹೆದರಿದ್ದಾರೆ.
ಪೊಲೀಸರು ಕೆಲಸ ಮಾಡುವುದು ಹೀಗೆ…
ಇದೇ ಡಿ.೨೧ರಂದು ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ತನ್ನ ಹೆರೂರುಮಕ್ಕಿಯ ತನ್ನ ಮನೆಗೆ ಬಂದು ಹೋದ. ಬರೋಬ್ಬರಿ ೧೨ ಗಂಟೆ ತನ್ನ ಮನೆಯಲ್ಲಿಯೇ ಇದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿಯೂ ಸಿಕ್ಕಿತು. ಪೊಲೀಸ್ ಜೀಪುಗಳು ಬಂದವು. ವಾಪಸ್ ಹೋದವು. ಬಿಜಿಕೆ ಮನೆಗೆ ಬಂದ ಪೊಲೀಸರು ಸುತ್ತಲಿನ ಪ್ರದೇಶಗಳನ್ನು ಹುಡುಕದೇ ಹಿಂದಿರುಗ್ದಿದು ಏಕೆ? ಈ ಪ್ರಶ್ನೆಗೆ ಉತ್ತರ ಹೇಳುವವರು ಯಾರು?
ಹಿಡಿಯಬೇಕಾದವರನ್ನು ಹಿಡಿಯಲು ಅಸಮರ್ಥರಾಗಿರುವ ಪೊಲೀಸರು ಅಮಾಯಕ ದಲಿತರ ಮೇಲೆ ತಮ್ಮ ದರ್ಪ ಮೆರೆಯುತ್ತಾರೆ. ಇತ್ತೀಚೆಗಷ್ಟೇ ಹೊಸಕೆರೆ ಕಾಲನಿಗೆ ಮಫ್ತಿ ಪೊಲೀಸ್ ತಂಡವೊಂದು ಬಂದಿತ್ತು. ಬಂದೂಕು ಹಿಡಿದ ಜನರನ್ನು ಕಂಡು ಭಯಗೊಂಡ ಯುವತಿಯೊಬ್ಬಳು ಹಿತ್ತಲಿನಲ್ಲಿ ಅಡಗಿ ಕುಳಿತಳು. ಅವಳನ್ನೇ ನಕ್ಸಲ್ ನಾಯಕಿ ಎಂದು ಕೊಂಡ ಪೊಲೀಸರು ಫೈರಿಂಗ್ ಪೊಸಿಷನ್ ತೆಗೆದುಕೊಂಡು ಅವಳನ್ನು ಹೆದರಿಸಿದರು. ಥಳಿಸಿ ಬಂಧಿಸಿದರು. ಅವಳ ಅಮಾಯಕತೆ ಸಾಬೀತಾದ ನಂತರ ಮನೆಗೆ ಕಳುಹಿಸಿದರು.
ನೋಡಿ ಸ್ವಾಮಿ, ಶೃಂಗೇರಿ ತ್ಲಾಲೂಕಿನ್ಲಲಿ ಪೊಲೀಸರೂ ಮಫ್ತಿಯ್ಲಲಿರುತ್ತಾರೆ. ನಕ್ಸಲರು ಮಫ್ತಿಯ್ಲಲಿರುತ್ತಾರೆ. ಅದಕ್ಕೆ ಜನ ಕೋವಿ ಕಂಡ ತಕ್ಷಣ ಹೆದರುತ್ತಾರೆ. ‘ನಾವು ನಕ್ಸಲರ್‍ಲಲ. ಪೊಲೀಸರು’ ಎನ್ನಲು ಪೊಲೀಸರಿಗೆ ಬಾಯಿ ಇರಲ್ಲಿಲವೇ. ತಮ್ಮಿಂದ ತಪ್ಪಾಗಿದೆ ಎಂದು ಗೊತ್ತಾದ ಮೇಲಾದರೂ ಕ್ಷಮೆಯಾಚಿಸಬೇಡವೇ?
ಹಫ್ತಾ ವಸೂಲಿ:
ಬೆಂಗಳೂರಿನಲ್ಲಿ ಹಫ್ತಾ ವಸೂಲಿ ಮಾಡುವ ರೌಡಿಗಳಿಗೂ, ನಮ್ಮೂರಿನಲ್ಲಿ ಬಡವರ ಬೆವರು ಹೀರುವ ನಕ್ಸಲರಿಗೂ ಅಂಥ ವ್ಯತ್ಯಾಸವಿಲ್ಲ. ಅಡಿಕೆ ಕೊಯ್ಲಿನ ಸಮಯದಲ್ಲಿ ಇಂಥ ಮನೆಗೆ ಇಷ್ಟು ಹಣ ಎಂದು ನಕ್ಸಲರು ‘ದೇಣಿಗೆ’ ನಿಗದಿಪಡಿಸ್ದಿದಾರೆ. ಊರಿನಲ್ಲಿರುವ ಸಣ್ಣಸಣ್ಣ ವ್ಯಾಜ್ಯಗಳನ್ನು ಬಳಸಿಕೊಂಡೇ ಬೇರೂರುವ ನಕ್ಸಲರು ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅರೆದು ಕುಡಿದ್ದಿದಾರೆ. ಯಾರ ಪರವಾಗಿ ತೀರ್ಪು ನೀಡುತ್ತಾರೋ ಅವರ ಮನೆಯಿಂದ ಸ್ನೇಹದ ಕಾಣಿಕೆ ರೂಪದ್ಲಲಿ ಅಷ್ಟು ಕೀಳುತ್ತಾರೆ, ಯಾರ ವಿರುದ್ಧ ತೀರ್ಪು ನೀಡುತ್ತಾರೋ ಅವರ ಮನೆಯಿಂದ ದಂಡ ಶುಲ್ಕವಾಗಿ ಅಷ್ಟು ಕೀಳುತ್ತಾರೆ. ಇದನ್ನು ನಾವು ಸಾಮಾಜಿಕ ಚಳವಳಿ ಎಂದು ಒಪ್ಪಬೇಕೆ?
ಪೊಲೀಸರಿಗೇ ಹೆದರಿಕೆ:
ನಕ್ಸಲರ ಬಗ್ಗೆ ಮಾಹಿತಿ ಸಂಗ್ರಹಿಸುವ ಅತ್ಯುತ್ತಮ ಜಾಲ ಹೆಣೆದ್ದಿದ ಗುಪ್ತಚರ ಅಧಿಕಾರಿಯನ್ನು ನಮ್ಮ ಪೊಲೀಸರು ಕೊಪ್ಪದಿಂದ ಮಂಗಳೂರಿಗೆ ವರ್ಗಾಯಿಸ್ದಿದಾರೆ. ಅಂಥ ಜಾಲ ಹೆಣೆಯಲು ಆ ಅಧಿಕಾರಿ ಅನೇಕ ವರ್ಷ ಶ್ರಮಪಟ್ಟ್ದಿದರು. ಇದೇ ರೀತಿ ನಕ್ಸಲ್ ಥ್ರೆಟ್ ಇರುವ ಇತರರನ್ನೂ ವರ್ಗಾಯಿಸುವ ಚಿಂತನೆ ನಡೆದಿದೆ. ತಮ್ಮ ಸಿಬ್ಬಂದಿಯನ್ನೇ ರಕ್ಷಿಸಿಕೊಳ್ಳಲು ಅಸಮರ್ಥರಾದ ಪೊಲೀಸರನ್ನು ನಂಬಿಕೊಂಡು ನಾವು ಬದುಕುವುದಾದರೂ ಹೇಗೆ? .
ನಕ್ಸಲರಿಗೆ ಹೆದರಿ ಮತ್ತು ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ಶೃಂಗೇರಿ ಮತ್ತು ಕುಂದಾಪುರ ತ್ಲಾಲೂಕಿನ ಅನೇಕ ಕುಟುಂಬಗಳು ಈಗಾಗಲೇ ಊರು ಬಿಟ್ಟಿವೆ. ಇದೇ ಪರಿಸ್ಥಿತಿ ಮುಂದುವರಿದರೆ ನಾವೂ ಊರು ಬಿಡುತ್ತೇವೆ.

ಎಂ.ಎನ್.ವ್ಯಾಸರಾವ್

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಸದಸ್ಯ, ಚಲನಚಿತ್ರ ಗೀತರಚನಾಕಾರ, ಕವಿ, ಕಥೆಗಾರ ಎಂ.ಎನ್.ವ್ಯಾಸರಾವ್ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಲ್ದೂರಿಗೆ ಇತ್ತೀಚೆಗೆ ಆಗಮಿಸ್ದಿದರು. ಕನ್ನಡ ಚಿತ್ರರಂಗ ಮತ್ತು ಸದ್ಯದ ಸಾಹಿತ್ಯ ಲೋಕದ ಬೆಳವಣಿಗೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
* ಸಿನಿಮಾ ಟ್ರೆಂಡ್‌ಗಳು ಹತ್ತು ವರ್ಷಕ್ಕೊಮ್ಮೆ ಬದಲಾಗುತ್ತದೆ ಎನ್ನುತ್ತಾರೆ. ಹಾಗ್ದಿದ್ಲಲಿ ಸಮಕಾಲೀನ ಕನ್ನಡ ಚಿತ್ರಗಳ್ಲಲಿ ಟ್ರೆಂಡ್ ಎಂದು ಯಾವುದನ್ನು ಕರೆಯಬಹುದು?
- ಮೊದಲು ಹತ್ತು ವರ್ಷಕ್ಕೊಮ್ಮೆ ಚಿತ್ರಗಳ ಟ್ರೆಂಡ್ ಬದಲಾಗುತ್ತಿತ್ತು. ಆದರೆ ಈಗ ವರ್ಷಕ್ಕೊಮ್ಮೆ ಟ್ರೆಂಡ್ ಬದಲಾಗುತ್ತಿದೆ. ಟ್ರೆಂಡ್‌ಗಳ ಬಗ್ಗೆ ಹಾಗೂ ಚಲನಚಿತ್ರಗಳ ಗುಣಮಟ್ಟದ ಬಗ್ಗೆ ನನ್ನ ಗೆಳೆಯರೂ ಆಗಿರುವ ನಿರ್ಮಾಕರೊಬ್ಬರು ಹೇಳ್ದಿದ ಮಾತೊಂದನ್ನು ನಿಮ್ಮ ಓದುಗರ ಜತೆ ಹಂಚಿಕೊಳ್ಳಬೇಕು ಎನಿಸುತ್ತೆ. “ಕನ್ನಡ ಚಲನಚಿತ್ರ ರಂಗ ಇದೀಗ ತೀವ್ರ ನಿಗಾ ಕೊಠಡಿಯ್ಲಲಿದೆ. ಸೂಕ್ತ ಚಿಕಿತ್ಸೆ ಸಿಗದ್ದಿದ್ಲಲಿ ಅದು ಶೀಘ್ರದ್ಲಲಿಯೇ ಸತ್ತುಹೋಗುತ್ತದೆ”.
* ಅವರ ಮಾತು ಬಿಡಿ, ಚಿತ್ರರಂಗವನ್ನು ಹತ್ತಿರದಿಂದ ಗಮನಿಸಿರುವ ನಿಮ್ಮ ಅಭಿಪ್ರಾಯವೇನು? ಅಷ್ಟನ್ನು ತಿಳಿಸಿ…
- ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳು ಆತಂಕ ಹುಟ್ಟಿಸುತ್ತಿವೆ. ಚಲನಚಿತ್ರಗಳನ್ನು ಮುನ್ನಡೆಸಬೇಕಾದ ‘ಆತ್ಮ’ ದಿನದಿಂದ ದಿನಕ್ಕೆ ಕೊಳೆಯುತ್ತಿದೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಬೆರಳೆಣಿಕೆಯಷ್ಟು ಸದಭಿರುಚಿಯ ಚಿತ್ರಗಳು ಮಾತ್ರ ಇಂದು ತೆರೆ ಕಾಣುತ್ತಿವೆ. ಇದು ನನ್ನ ಖೇದ ಮತ್ತು ಗಾಢವಾಗಿ ನನ್ನನ್ನು ಕಾಡುತ್ತಿರುವ ಆತಂಕ.
* ಅದು ಎಲರಿಗೂ ಗೊತ್ತಿರುವ ವಿಚಾರ…
- ಹೌದು, ಅದು ಎಲರಿಗೂ ಗೊತ್ತಿರುವ ವಿಚಾರ. ಆದರೆ ಇಂದಿನ ನಿರ್ಮಾಕರು ಯಾಕೆ ಅದನ್ನು ಗಮನಿಸುತ್ತ್ಲಿಲ ಎಂಬುದೇ ನನ್ನ ಪ್ರಶ್ನೆ. ಸಿನಿಮಾ ತೆಗೆಯುವುದು ಒಂದು ಕಲಾತ್ಮಕ ‘ಹುಚ್ಚು’ ಆಗ್ದಿದ ಕಾಲದ್ಲಲಿ ಇಂಥ ಪರಿಸ್ಥಿತಿ ತಲೆದೋರಿರಲ್ಲಿಲ. ಅದೊಂದು ಹಣ ಹಾಕಿ ಹಣ ತೆಗೆಯುವ ‘ಪಕ್ಕಾ ವ್ಯಾಪಾರ’ವಾದ ನಂತರದ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗ್ದಿದೇವೆ.
* ಸೆನ್ಸಾರ್ ಮಂಡಳಿಯ ಸದಸ್ಯರೂ ಆಗಿರುವ ನೀವು ಇತ್ತೀಚಿನ ಚಿತ್ರಗಳ ಬಗ್ಗೆ ಹೇಳುವುದೇನು? ನಮಗೆ ಎಂಥ ಚಿತ್ರಗಳು ಬೇಕು?
- ವ್ಯಾಪಾರಿ ಚಿತ್ರಗಳು ಮತ್ತು ಕಲಾತ್ಮಕ ಚಿತ್ರಗಳು ಎಂಬ ದ್ವೀಪಗಳು ಕನ್ನಡ ಚಿತ್ರರಂಗದ್ಲಲಿ ಬಹುಕಾಲದಿಂದ ಉಳಿದುಕೊಂಡಿವೆ. ಇವೆರಡಕ್ಕೂ ಸೇತುವೆ ನಿರ್ಮಿಸುವ ಪ್ರತಿಭಾವಂತರು ಇಂದಿನ ತುರ್ತು. ಸೆನ್ಸಾರ್‌ಗೆಂದು ತೋರಿಸುವ ಕೆಲವು ಚಲನಚಿತ್ರಗಳ್ಲಲಿ ಒಂದೂ ಶಾಟ್ ಉಳಿಸಬೇಕು ಎನಿಸುವುದ್ಲಿಲ. ಕನ್ನಡ ಚಿತ್ರರಂಗವನ್ನು ಐಸಿಯುನಿಂದ ಹೊರಗೆ ತರುವ ಗಟ್ಟಿ ಚಿತ್ರಗಳು ಬೇಕು. ಅವು ಕಲಾತ್ಮಕವಾಗಿಯೂ ಉತ್ತಮ ಗುಣಮಟ್ಟ್ದದಾಗಿರಬೇಕು, ಸಾಮಾನ್ಯ ಜನರಿಗೂ ತಲುಪುವಂತಿರಬೇಕು. ನಮಗೆ ‘ಸೇತುವೆ’ ಕಟ್ಟುವ ಗಟ್ಟಿ ಜನ ಬೇಕು.
* ನೀವು ಚಿತ್ರ ತಯಾರಿಸುವವರನ್ನೇ ದೂರುತ್ತೀರಿ, ಅವರು ನೋಡಿದರೆ ‘ಜನ ಬಯಸುವುದನ್ನು ನಾವು ಕೊಡುತ್ತೇವೆ ಎನ್ನುತ್ತಾರೆ’…
- ‘ತೆರೆಯ ಮೇಲೆ ರಕ್ತ ಚ್ಲೆಲುವುದನ್ನು ನೋಡಬೇಕು’ ಎಂದು ಯಾವೊಬ್ಬ ಪ್ರೇಕ್ಷಕನೂ ಯಾವುದೇ ನಿರ್ಮಾಪಕನಿಗೆ ಬೇಡಿಕೆ ಸ್ಲಲಿಸಿ ಪತ್ರ ಬರೆದ ಬಗ್ಗೆ ನನಗೆ ತಿಳಿದ್ಲಿಲ. ಜನರಿಗೆ ಎಂಥ್ದದನ್ನು ಬಯಸಬೇಕು ಎಂಬುದನ್ನೂ ತಿಳಿಸಿಕೊಡುವ ಹೊಣೆ ಪ್ರಜ್ಞಾವಂತರಿಗಿದೆ.
* ತಿಳಿಸಿಕೊಡುವ ಬಗೆಯಾದರೂ ಹೇಗೆ? ತಿಳಿಸಿಕೊಡುವವರು ಯಾರು?
- ಇದು ಎಲ ಸಹೃದಯರ ಜವಾಬ್ದಾರಿ. ಈ ಕುರಿತು ಚಲನಚಿತ್ರ ಅಕಾಡೆಮಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳ ಪೈಕಿ ಬೆಳ್ಳಿಸಾಕ್ಷಿ ಮತ್ತು ಬೆಳ್ಳಿಮಂಡಲ ಯೋಜನೆಗಳು ಅತ್ಯಂತ ಮುಖ್ಯ. ಬೆಳ್ಳಿಮಂಡಲ ಎನ್ನುವುದು ಜ್ಲಿಲೆ ತ್ಲಾಲೂಕು ಮಟ್ಟದ ಫಿಲಂ ಸೊಸೈಟಿ, ಬೆಳ್ಳಿಸಾಕ್ಷಿ ಎನ್ನುವುದು ಕಾಲೇಜುಗಳ್ಲಲಿ ಅಸ್ತಿತ್ವಕ್ಕೆ ಬರುವ ಫಿಲಂಕ್ಲಬ್‌ಗಳು. ಸಾಮಾನ್ಯ ಜನರಿಗೆ ಸದಭಿರುಚಿಯ ಚಿತ್ರಗಳನ್ನು ತೋರಿಸಿ ಅವರ ಸಂವೇದನೆಯನ್ನು ಮತ್ತಷ್ಟು ಮೊನಚು ಮಾಡುವ ಮಹತ್ವದ ಪ್ರಯತ್ನ ಈ ಯೋಜನೆಗಳ್ಲಲಿ ಅಡಗಿದೆ.
ಎಲವೂ ಅಂದುಕೊಂಡಂತೆ ಆದರೆ, ‘ಪ್ರೇಕ್ಷಕ ಕೇಳ್ದಿದನ್ನು ನಾವು ಕೊಟ್ಟ್ದಿದೇವೆ’ ಎಂಬ ನಿರ್ಮಾಪಕರ ದೂರು ಇನ್ನು ಕೆಲವೇ ವರ್ಷಗಳ್ಲಲಿ ಅಡಗುತ್ತದೆ. ಉತ್ತಮ ಚಿತ್ರ ಬೇಕು ಎಂಬ ತಹತಹ ಪ್ರೇಕ್ಷಕನ್ಲಲಿ ಬಂದಾಗ ಚಿತ್ರರಂಗ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.
* ಚಲನಚಿತ್ರವನ್ನು ಒಂದು ಕಲೆಯಾಗಿ- ಶಾಸ್ತ್ರೀಯವಾಗಿ ಅಭ್ಯಾಸ ಮಾಡುವ ಅನೇಕ ಗಂಭೀರ ನಿಯತಕಾಲಿಕೆಗಳು ಮಲೆಯಾಳಂ, ಬೆಂಗಾಲಿ ಭಾಷೆಗಳ್ಲಲಿವೆ. ಕನ್ನಡದ್ಲಲಿ ಏಕೆ ಅಂಥ ಪ್ರಯತ್ನಗಳಾಗ್ಲಿಲ?
- ಮುಂದಿನ ದಿನಗಳ್ಲಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಇಂಥ ಪ್ರಯತ್ನಕ್ಕೆ ಮುಂದಾಗಲಿದೆ. ಚಲನಚಿತ್ರ ನಿರ್ಮಾಣದ್ಲಲಿ ತೊಡಗಿರುವ ತಂತ್ರಜ್ಞರು ಮತ್ತು ಕಲಾವಿದರಿಂದಲೇ ಲೇಖನಗಳನ್ನು ಬರೆಸಿ, ಅವನು ಅನುಭವ ಮತ್ತು ಅನಿಸಿಕೆಗಳನ್ನು ಬೆಳಕಿಗೆ ತರಲು ಒಂದು ನಿಯತಕಾಲಿಕೆಯನ್ನು ಪ್ರಕಟಿಸುವ ಕೆಲಸಗಳು ಸಾಗಿವೆ. ಕನ್ನಡ ಚಿತ್ರರಂಗದ ಬಹುಕಾಲದ ಕೊರತೆಯನ್ನು ಈ ಯತ್ನ ತುಂಬಿಕೊಡಲಿದೆ.
* ನೀವು ತುಂಬ ಇಷ್ಟಪಟ್ಟ ಚಲನಚಿತ್ರ ಯಾವುದು? ಎರಡನೇ ಯೋಚನೆಯೇ ಇಲದೆ ಥಟ್ಟಂತ ಹೇಳಿ…
- ಬಂಗಾರದ ಮನುಷ್ಯ.
* ಯಾಕೆ?
- ಮನುಷ್ಯನೊಬ್ಬನ ಸಾರ್ಥಕ ಬದುಕು ಅಂದರೆ ‘ಬಂಗಾರದ ಮನುಷ್ಯ’ ಚಿತ್ರದ್ಲಲಿರುವ ರಾಜ್‌ಕುಮಾರ್ ಪಾತ್ರ. ಕಥೆ, ನಿರ್ಮಾಣ, ಸಂಗೀತ, ಅಭಿನಯ ಎಲವೂ ಒಂದಕ್ಕೊಂದು ಪೂರಕವಾಗಿರುವ ಈ ಚಿತ್ರ ನನಗೆ ತುಂಬಾ ಇಷ್ಟ. ನಾಗರಹಾವು, ಬೆಳ್ಳಿಮೋಡ ಚಲನಚಿತ್ರಗಳನ್ನೂ ನಾನು ತುಂಬ ಮೆಚ್ಚುತ್ತೇನೆ.
-ಸಂದರ್ಶನ: ಡಿ.ಎಂ.ಘನಶ್ಯಾಮ.

ಆಧ್ಯಾತ್ಮ ಸಾಮ್ರಜ್ಯದ ಅಧಿಪತಿ ಏಸುಕ್ರಿಸ್ತ

ಚಿಕ್ಕಮಗಳೂರು: ‘ಮನುಷ್ಯನ ದುರಾಸೆಗಳಿಗೆ ಕಡಿವಾಣ ಬಿದ್ದಾಗ ಭೂಮಿ ಬಿಸಿಯಾಗುವುದು ನ್ಲಿಲುತ್ತದೆ…’ ಇದು ಚಿಕ್ಕಮಗಳೂರು ಕ್ರೈಸ್ತ ಧರ್ಮಕ್ಷೇತ್ರದ ಬಿಷಪ್ ಡಾ.ಟಿ.ಆಂತೋಣಿ ಸ್ವಾಮಿ ಅವರು ‘ಕ್ರಿಸ್‌ಮಸ್’ ಅಂಗವಾಗಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ ಮಾತು.
ಕ್ರಿಸ್‌ಮಸ್ ಸಂದೇಶದ ಪ್ರಮುಖ ಅಂಶಗಳಿವು…
ಜಾಗತಿಕ ತಾಪಮಾನ:
ದೇವರ ಸೃಷ್ಟಿಯಲ್ಲಿ ಅಂದರೆ ಪ್ರಕೃತಿಯಲ್ಲಿ ಮನುಷ್ಯನ ವಿಪರೀತ ಹಸ್ತಕ್ಷೇಪವೇ ಭೂಮಿ ಬಿಸಿಯಾಗಲು ಪ್ರಮುಖ ಕಾರಣ. ಮನುಷ್ಯ ಪ್ರಕೃತಿಯನ್ನು ನಾಶ ಮಾಡಲು ಮುಂದಾದ ಸಂದರ್ಭದಲ್ಲಿ ಪ್ರಕೃತಿ ತನ್ನ ಸಿಟ್ಟನ್ನು ತೋರಿಸುತ್ತದೆ. ಕಾಡು ಮತ್ತು ಜಲ ಸಂಪನ್ಮೂಲಗಳ ರಕ್ಷಣೆಯಿಂದ ಮಾತ್ರ ಭೂಮಿಯನ್ನು ಉಳಿಸಲು ಸಾಧ್ಯ. ದುರಾಸೆಯನ್ನು ಬದಿಗಿಟ್ಟು ಪ್ರಾಮಾಣಿಕ ಬಾಳು ಬಾಳುವ ನಿರ್ಧಾರವನ್ನು ಮನುಷ್ಯರು ಮಾಡಿದರೆ ಪರಿಸ್ಥಿತಿ ತಾನಾಗಿಯೇ ಸುಧಾರಿಸುತ್ತದೆ.
ಜಾಗತಿಕ ತಾಪಮಾನ ತಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಸರಳ ಜೀವನ. ಏಸು ಸ್ವಾಮಿ ಅದನ್ನು ತಮ್ಮ ಬದುಕಿನಲ್ಲೇ ಅಳವಡಿಸಿಕೊಂಡು ತೋರಿಸಿದರು. ಈ ವರ್ಷದ ಕ್ರಿಸ್‌ಮಸ್ ಆಚರಣೆ ಸಂದರ್ಭದಲ್ಲಿ ಪ್ರಭು ಏಸುವಿನ ಸರಳತೆಯನ್ನು ಮನನ ಮಾಡಿಕೊಳ್ಳುವ ಮತ್ತು ಮನನ ಮಾಡಿಸುವ ಪ್ರಯತ್ನಗಳು ಹೆಚ್ಚಾಗಿ ನಡೆಯಬೇಕು.
ಮನುಷ್ಯನೊಬ್ಬ ಸರಳತೆಯನ್ನು ಅಪ್ಪಿಕೊಂಡಾಗ ಸಹಜವಾಗಿಯೇ ಕಾಮ, ಕ್ರೋಧ, ಮದ ಮತ್ತು ಮತ್ಸರಗಳು ಅವನಿಂದ ದೂರವಾಗುತ್ತವೆ. ಇದು ವ್ಯಕ್ತಿಯ ಆಧ್ಯಾತ್ಮಿಕ ಜೀವನದ ಪ್ರಗತಿಗೂ ಸಹಕಾರಿ.
ಬದುಕು ಮುಖ್ಯ:
ಸಿರಿತನ ಮತ್ತು ಬಡತನಕ್ಕಿಂತ ನಾವು ಬದುಕುವ ಬದುಕು ಬಹುಮುಖ್ಯ. ಏಸುಕ್ರಿಸ್ತ ಹುಟ್ಟಿದ್ದು ಕೊಟ್ಟಿಗೆಯಲ್ಲಿ ಆದರೆ ತಮ್ಮ ಸಮಾಜ ಪ್ರೀತಿಯ ಪ್ರಾಮಾಣಿಕ ಬದುಕಿನಿಂದ ಅವರು ಜಗತ್ತಿಗೆ ಒಡೆಯರಾದರು. ಆಧ್ಯಾತ್ಮ ಸಾಮ್ರಾಜ್ಯವನ್ನೇ ಆಳಿದ ಏಸುಕ್ರಿಸ್ತ ಲೌಕಿಕದಲ್ಲಿ ಬಡವರಾಗಿಯೇ ಕಾಣಿಸಿಕೊಂಡರು. ತಮ್ಮ ಜೀವಿತಾವಧಿಯ ಕೊನೆಯ ಮೂರು ವರ್ಷಗಳಲ್ಲಿ ಬಹಿರಂಗ ಜೀವನಕ್ಕೆ ಕಾಲಿಟ್ಟ ಅವರು ಎಲರಿಗೂ ಮಾದರಿಯಾಗುವಂತೆ ಬದುಕಿ ತೋರಿಸಿದರು.
ದೇವರನ್ನು ನಂಬುವ ಎಲ್ಲರೂ ಪರರ ಬಗ್ಗೆ ಪ್ರೀತಿ ಮತ್ತು ಗೌರವ ಇಟ್ಟುಕೊಳ್ಳಲೇ ಬೇಕು. ದೇವರ ಸೃಷ್ಟಿಯನ್ನು ಗೌರವಿಸಿದಾಗ, ಕಾಪಾಡಿದಾಗ ಮಾತ್ರ ದೇವರನ್ನು ಗೌರವಿಸಿದಂತೆ ಆಗುತ್ತದೆ. ತನ್ನನ್ನು ತಾನು ಅರ್ಥ ಮಾಡಿಕೊಂಡು ಇತರರ ಮನಸ್ಸನ್ನೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ.
ಭ್ರಷ್ಟ ರಾಜಕಾರಣ:
ಇಂದಿನ ರಾಜಕಾರಣ ಸ್ವಾರ್ಥ ಹಾಗೂ ಭ್ರಷ್ಟತೆಯಿಂದ ತುಂಬಿದೆ. ರಾಜಕೀಯ ಜೀವನದಲ್ಲಿರುವ ವ್ಯಕ್ತಿ ಪರರ ಒಳಿತಿಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿದುಕೊಳ್ಳಬೇಕು. ಲ್ಯಾಟಿನ್ ಭಾಷೆಯಲ್ಲಿ ಮಿನಿಸ್ಟರ್ ಎಂದರೆ ಸೇವಕ ಎಂದು ಅರ್ಥ. ಆದರೆ ವ್ಯತಿರಿಕ್ತ ಪರಿಸ್ಥಿತಿಯೇ ಗೋಚರಿಸುತ್ತಿದೆ. ಮಿನಿಷ್ಟರ್ ಪದ ಹೊತ್ತವರು ಜನರ ಒಡೆಯರಾಗ್ದಿದರೆ, ಸಾಮಾನ್ಯ ಜನತೆ ಅವರ ಸೇವಕರಂತಾಗ್ದಿದಾರೆ.
‘ನಾನು ಭೂಲೋಕಕ್ಕೆ ಬಂದ್ದಿದು ಸೇವೆ ಮಾಡಲು, ಸೇವೆ ಮಾಡಿಸಿಕೊಳ್ಳಲು ಅಲ’ ಎಂಬ ಏಸು ಸ್ವಾಮಿಯ ಮಾತನ್ನು ನಮ್ಮ ರಾಜಕಾರಿಣಿಗಳು ಅರ್ಥ ಮಾಡಿಕೊಂಡು ಅನುಸರಿಸಲು ಯತ್ನಿಸಿದರೆ ಮಾತ್ರ ಅವರ ಮನಸಿನ್ಲಲಿರುವ ಸ್ವಾರ್ಥ ದೂರವಾಗಿ ಹಣ ಗಳಿಸಿ ಬಚ್ಚಿಡುವ ಪ್ರವೃತ್ತಿಯಿಂದ ಹೊರ ಬರುತ್ತಾರೆ.
ಸರಳ ಜೀವನಕ್ಕೆ ಒತ್ತು:
ಕುಟುಂಬವೊಂದರೆ ಸರಳ ಜೀವನಕ್ಕೆ ಮಹಿಳೆಯರು ಹೆಚ್ಚು ಒತ್ತು ನೀಡಬೇಕು. ಗಂಡಸರು ಅಕ್ರಮ ರೀತಿಯ್ಲಲಿ ಹಣಗಳಿಸಲು ಯತ್ನಿಸಿದರೆ ಅವರು ಕಡಿವಾಣ ಹಾಕಬೇಕು. ಎಲ ಧರ್ಮದ ಧರ್ಮ ಗುರುಗಳು ಸಹ ಸರಳ ಜೀವನ ನಡೆಸಲು ತಮ್ಮ ಅನುಯಾಯಿಗಳಿಗೆ ಪ್ರೇರಣೆ ನೀಡಬೇಕು. ವ್ಯಕ್ತಿಯ ಮನಸಿನ್ಲಲಿ ನಾನು ಎನ್ನುವ ಗರ್ವ ಹೋಗಿ ನಾವು ಎಂಬುದು ಮೂಡಿದಾಗ ಮಾತ್ರ ದೇವರ ಪೂಜೆ ಪರಿಪೂರ್ಣವಾಗುತ್ತದೆ.
ಆಶೀರ್ವಾದ:
ಇಡೀ ಜಗತ್ತಿನ್ಲಲಿ ಶಾಂತಿ ಮತ್ತು ಸೌಹಾರ್ದತೆ ಸದಾ ಕಾಲವೂ ನೆಲೆಗೊಳ್ಳುವಂತೆ ಏಸು ಸ್ವಾಮಿ ಆಶೀರ್ವಾದಿಸಲಿ ಎಂದು ಕೋರುತ್ತೇನೆ.
ಶೃಂಗೇರಿ: ಆಟೋ ಚಾಲಕನ ಮೇಲೆ ನಕ್ಸಲ್ ನಿಗ್ರಹ ದಳದ ಪೇದೆ ಹಲ್ಲೆ ನಡೆಸಿದ್ದನ್ನು ವಿರೋಧಿಸಿ, ಮುಷ್ಕರ ನಡೆಸಿದ ಚಾಲಕರು ರಸ್ತೆ ತಡೆಗೆ ಮುಂದಾದಾಗ ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆಯಿತು.
ಮುಖ್ಯ ರಸ್ತೆಯ್ಲಲಿ ಆಟೋ ಚಾಲನೆಮಾಡುತ್ದಿದ ಸುಬ್ರಹ್ಮಣ್ಯ ಎಂಬ ಚಾಲಕನಿಗೆ ಎಎನ್‌ಎಫ್ ಪೇದೆ ಹರೀಶ್ ಎಂಬುವರು ವಿನಾಕಾರಣ ಹಲ್ಲೆ ಮಾಡಿ ಆತನ ಸಮವಸ್ತ್ರ ಹರಿದರೆಂಬ ಕಾರಣಕ್ಕೆ ಉದ್ರಿಕ್ತರಾದ ಆಟೋ ಚಾಲಕರು ಪೊಲೀಸ್ ಠಾಣೆ ಎದುರು ಪ್ರತಿಭಟನಾ ಧರಣಿ ನಡೆಸಿದರು. ಪಟ್ಟಣ ಪ್ರವೇಶ ದ್ವಾರದ ಬಳಿ ಹಲವು ಗಂಟೆ ಕಾಲ ರಸ್ತೆ ತಡೆ ನಡೆಸಿ ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಹಲ್ಲೆ ಮಾಡಿದ ಪೇದೆಯನ್ನು ಬಂಧಿಸಬೇಕೆಂದು ಆಗ್ರಹಿಸಿದ ಆಟೋ ಚಾಲಕರು, ಈ ಪೇದೆ ಹಲವು ಬಾರಿ ಅನುಚಿತವಾಗಿ ವರ್ತಿಸುತ್ದಿದನೆಂದು ದೂರಿದರು.
ಜಿ.ಪಂ.ಸದಸ್ಯ ಕೃಷ್ಣಮೂರ್ತಿ, ಶಿವಶಂಕರ್, ತಾ.ಪಂ.ಅಧ್ಯಕ್ಷ ನಯನ, ಪ.ಪಂ.ಅಧ್ಯಕ್ಷ ಪರಾಶರ ಹಾಗೂ ಚುನಾಯಿತ ಪ್ರತಿನಿಧಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾಗ ವಿಚಾರಣೆಗೆಂದು ವಶಕ್ಕೆ ಪಡೆದ ಇಬ್ಬರು ಆಟೋ ಚಾಲಕರ ಮೇಲೆ ಠಾಣೆ ಒಳಗೆ ಪೊಲೀಸರು ಹಲ್ಲೆ ನಡೆಸಿದರು.
ಚುನಾಯಿತ ಪ್ರತಿನಿಧಿಗಳ ಎದುರೆ ಆಟೋ ಚಾಲಕರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಅವರೆಲ್ಲರೂ ಪ್ರತಿಭಟನೆ ನಡೆಸಿದರು.
ಆಟೋ ಚಾಲಕರ ಮುಷ್ಕರದಿಂದ ಜನಜೀವನ ಅಸ್ತವ್ಯವಸ್ತ ಗೊಂಡಿಗೆ. ಪಟ್ಟಣ ಉದ್ವಿಗ್ನ ಸ್ಥಿತಿಯಲ್ಲಿದೆ. ಡಿವೈಎಸ್‌ಪಿ ಅಬು ಅಹಾದ್, ಅಡಿಷನಲ್ ಎಸ್‌ಪಿ ಮುತ್ತೂರಾಯ ಸ್ಥಳಕ್ಕೆ ಭೇಟಿ ನೀಡಿ ಆಟೋ ಚಾಲಕರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ಕಲ್ಯಾಣೋತ್ಸವದ ಅಂಗವಾಗಿ ಮಾಂಗಲ್ಯ ತೋರಿಸುತ್ತಿರುವ ಆಗಮಿಕರು.

ಚಿಕ್ಕಮಗಳೂರು: ಹರಿದಾಸ ಸಂಗೀತ, ವೇದಘೋಷ, ಗೋವಿಂದ ನಾಮ ಸ್ಮರಣೆಗಳ ನಡುವೆ ನಗರದ ಜ್ಲಿಲಾ ಆಟದ ಮೈದಾನದ್ಲಲಿ ಭಾನುವಾರ ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಂಡಿತು.
ಉತ್ಸವದ ಆಯೋಜಕ ವೆಂಕಟಸುಬ್ಬರಾವ್ ಮತ್ತು ಗೀತಾ ದಂಪತಿಗಳು ಭಕ್ತರ ಪರವಾಗಿ ಕಲ್ಯಾಣೋತ್ಸವದ ಸಂಕಲ್ಪ ಮಾಡಿದರು. ತಿರುಪತಿಯಿಂದ ಆಗಮಿಸ್ದಿದ ವಾದಿರಾಜಾಚಾರ್ ಮತ್ತು ಆನಂದತೀರ್ಥಾಚಾರ್ ಅವರ ನೇತೃತ್ವದ್ಲಲಿ ಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮನವರ ವಿವಾಹ ಮಹೋತ್ಸವ ಅದೂರಿಯಾಗಿ ನಡೆಯಿತು.
ಗಾಯಕರಾದ ಶಶಿಧರ್ ಕೋಟೆ, ನಂದಿನಿ ಸಂದರ್ಭಕ್ಕೆ ತಕ್ಕಂತೆ ದಾಸರ ಪದಗಳನ್ನು ಹೊಂದಿಸಿ ಹಾಡಿದರು. ಉಡುಪಿ ಮಠದ ವಿದ್ವಾಂಸ ಗೋಪಾಲಾಚಾರ್ಯ ಅಗತ್ಯ ಮಾರ್ಗದರ್ಶನ ನೀಡಿದರು. ವಾಸವಿ ಪೀಠಾಧಿಪತಿ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸ್ದಿದರು.

ಕಲ್ಯಾಣೋತ್ಸವದ ಅಂಗವಾಗಿ ಮಾಂಗಲ್ಯ ತೋರಿಸುತ್ತಿರುವ ಆಗಮಿಕರು.—ಶ್ರೀನಿವಾಸ ಕಲ್ಯಾಣಕ್ಕೆ ವೈಭವದ ತೆರೆಪ್ರಜಾವಾಣಿ ವಾರ್ತೆಚಿಕ್ಕಮಗಳೂರು: ಹರಿದಾಸ ಸಂಗೀತ, ವೇದಘೋಷ, ಗೋವಿಂದ ನಾಮ ಸ್ಮರಣೆಗಳ ನಡುವೆ ನಗರದ ಜ್ಲಿಲಾ ಆಟದ ಮೈದಾನದ್ಲಲಿ ಭಾನುವಾರ ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಂಡಿತು.ಉತ್ಸವದ ಆಯೋಜಕ ವೆಂಕಟಸುಬ್ಬರಾವ್ ಮತ್ತು ಗೀತಾ ದಂಪತಿಗಳು ಭಕ್ತರ ಪರವಾಗಿ ಕಲ್ಯಾಣೋತ್ಸವದ ಸಂಕಲ್ಪ ಮಾಡಿದರು.

ತಿರುಪತಿಯಿಂದ ಆಗಮಿಸ್ದಿದ ವಾದಿರಾಜಾಚಾರ್ ಮತ್ತು ಆನಂದತೀರ್ಥಾಚಾರ್ ಅವರ ನೇತೃತ್ವದ್ಲಲಿ ಶ್ರೀನಿವಾಸ ಮತ್ತು ಪದ್ಮಾವತಿ ಅಮ್ಮನವರ ವಿವಾಹ ಮಹೋತ್ಸವ ಅದೂರಿಯಾಗಿ ನಡೆಯಿತು.ಗಾಯಕರಾದ ಶಶಿಧರ್ ಕೋಟೆ, ನಂದಿನಿ ಸಂದರ್ಭಕ್ಕೆ ತಕ್ಕಂತೆ ದಾಸರ ಪದಗಳನ್ನು ಹೊಂದಿಸಿ ಹಾಡಿದರು. ಉಡುಪಿ ಮಠದ ವಿದ್ವಾಂಸ ಗೋಪಾಲಾಚಾರ್ಯ ಅಗತ್ಯ ಮಾರ್ಗದರ್ಶನ ನೀಡಿದರು. ವಾಸವಿ ಪೀಠಾಧಿಪತಿ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸ್ದಿದರು.

Follow

Get every new post delivered to your Inbox.